ಯಕ್ಷಗಾನ ಕೃತಿ: ಅರ್ಜಿ ಆಹ್ವಾನ
ಲೇಖಕರು : ಉದಯವಾಣಿ
ಸೋಮವಾರ, ಜೂನ್ 3 , 2013
|
ಬೆಂಗಳೂರು: ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯು ಯಕ್ಷಗಾನ ಬಯಲಾಟದ ವಿವಿಧ ಕಲಾಪ್ರಕಾರ ಕುರಿತು ಕೃತಿ ಪ್ರಕಟಿಸಿರುವ ಲೇಖಕರಿಂದ ಬಹುಮಾನಕ್ಕೆ ಅರ್ಜಿ ಆಹ್ವಾನಿಸಿದೆ.
ಆಯ್ಕೆಯಾದ ಕೃತಿಗೆ 5 ಸಾವಿರ ನಗದು ಬಹುಮಾನವನ್ನು ನೀಡಲಾಗುವುದು. ಸಂಶೋಧನೆ, ವಿಮರ್ಶೆ, ಜೀವನ ಚರಿತ್ರೆ ಸೇರಿದಂತೆ ಯಕ್ಷಗಾನದ ವಿವಿಧ ಆಯಾಮಗಳ ಕುರಿತು ರಚಿಸಿರುವ ಲೇಖಕರೂ ಅರ್ಜಿ ಸಲ್ಲಿಸಬಹುದು.
ಆಸಕ್ತರು ಪುಸ್ತಕದ 4 ಪ್ರತಿಗಳೊಂದಿಗೆ ರಿಜಿಸ್ಟ್ರಾರ್, ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ, ಕನ್ನಡ ಭವನ, 2ನೇ ಮಹಡಿ, ಚಾಲುಕ್ಯ ವಿಭಾಗ, ಜೆ.ಸಿ. ರಸ್ತೆ, ಬೆಂಗಳೂರು-02. ಇಲ್ಲಿಗೆ ಜುಲೈ 15 ರೊಳಗೆ ಅರ್ಜಿ ಸಲ್ಲಿಸುವಂತೆ ಪ್ರಕಟಣೆ ತಿಳಿಸಿದೆ. ಹೆಚ್ಚಿನ ವಿವರಗಳಿಗೆ ದೂ. ಸಂಖ್ಯೆ 22113146 ಗೆ ಸಂಪರ್ಕಿಸಬಹುದು.
ಕೃಪೆ : http://www.udayavani.com
|
|
|